Knowledge has no beginning, Learning has no end ...
ಚಂಪೂ, ತ್ರಿಪದಿ, ರಗಳೆ, ಷಟ್ಟದಿ ಈ ಮೊದಲಾದ ಛಂದೋರೂಪಗಳ ನ೦ತರ ಬಂದ ಸಾಂಗತ್ಯ ಪ್ರಕಾರವು ಐದು ಶತಮಾನಗಳ ಸುದೀರ್ಫವಾದ ಇತಿಹಾಸವನ್ನು ಹೊಂದಿದೆ. ಈ ದೇಶಿಯ ಕಾವ್ಯ ಪ್ರಕಾರದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕೃತಿಗಳು ರಚಿತಗೊಂಡಿವೆ. ಆಧುನಿಕ ಕಾಲದಲ್ಲೂ ಈ ಪ್ರಕಾರ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಏಳೆ, ತ್ರಿಪದಿ, ಅಕ್ಕರ...
ಕವಿ ಪರಿಚಯ : ಸರ್ವಜ್ಞನು ಕ್ರಿ.ಶ. ಸುಮಾರು ಹದಿನೇಳನೆಯ ಶತಮಾನದ ಕವಿ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಅಬಲೂರು ಇವನ ಜನ್ಮಸ್ಥಳ. ವಿಸ್ತಾರವಾದ ಲೋಕಾನುಭವ, ವಿಶಾಲವಾದ ಜೀವನ ದೃಷ್ಟಿಯನ್ನು ಪಡೆದ ಇವನು “ಸರ್ವಜ್ಞ” ಎಂಬ ಅಂಕಿತದಿಂದ ಮುಕ್ತಾಯವಾಗುವ ತ್ರಿಪದಿಗಳನ್ನು ರಚಿಸಿದ್ದಾನೆ. ಯಾರ ಹಂಗಿಗೂ ಒಳಗಾಗದೆ ಸ್ವತಂತ್ರವಾಗಿ ಬದುಕಿದ...
ತ್ರಿಪದಿ ಒಂದು ದೇಸಿ ಛಂದೋಪ್ರಕಾರ. “ಜನವಾಣಿ ಮಳೆ; ಕವಿವಾಣಿ ಹೊಳೆ’ ಎಂಬ ಡಾ. ಬೆಟಗೇರಿ ಕೃಷ್ಣಶರ್ಮರ ಮಾತಿನಂತೆ ಕನ್ನಡ ಸಾಹಿತ್ಯಕ್ಕೆ ಜನಪದ ಕವಿಗಳು ನೀಡಿದ ಅಪೂರ್ವ ಕೊಡುಗೆ. ಶಿಷ್ಟ ಕವಿಗಳ ಆದರಕ್ಕೂ ಒಳಗಾಗಿರುವ ಈ ಕಾವ್ಯ ಪ್ರಕಾರದ ಮೂಲವನ್ನು ಜನಪದರ “ಗರತಿಯ ಹಾಡು’ಗಳಲ್ಲಿ ಕಾಣಬಹುದಾಗಿದೆ. ಏಳನೆಯ ಶತಮಾನದ...
ಕವಿ-ಕಾವ್ಯ ಪರಿಚಯ : ಚಿಕ್ಕುಪಾಧ್ಯಾಯ ಕ್ರಿ, ಶ. ಸುಮಾರು 1677ರಲ್ಲಿ ತೆರಕಣಾಂಬಿಯಲ್ಲಿ ಜನಿಸಿದನು. ತಂದೆ ರಂಗಾರ್ಯ ಪಂಡಿತ, ತಾಯಿ ನಾಚ್ಚಾರಮ್ಯ. ಕವಿಯ ಮೊದಲಿನ ಹೆಸರು ಲಕ್ಷ್ಮೀಪತಿ ಎಂಬುದಾಗಿತ್ತು. ಈತ ಮೈಸೂರು ಅರಸ ಚಿಕ್ಕದೇವರಾಜರಲ್ಲಿ ಮಂತ್ರಿಯಾಗಿದ್ದನು. ಈತನು ಚ೦ಪೂ, ಸಾ೦ಗತ್ಯ, ಗದ್ಯ ಹಾಡು ಮುಂತಾದ ಛಂದೋ ಪ್ರಭೇದಗಳಲ್ಲೆಲ್ಲಾ ಕಾವ್ಯಗಳನ್ನು...
ಸಾಹಿತ್ಯದ ಪ್ರಕಾರಗಳಲ್ಲಿ ಶತಕ ಸಾಹಿತ್ಯವೂ ಒಂದು. ಇದಕ್ಕೆ ಪ್ರಾಚೀನ ಹಿನ್ನೆಲೆಯಿದೆ ಮತ್ತು ಆಧುನಿಕ ಯುಗದವರೆಗೆ ಅದರ ಮುನ್ನೋಟವಿದೆ. ಇದೊಂದು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಸಾಹಿತ್ಯ ಪ್ರಕಾರ. ಶತಕವೆಂದರೆ ನೂರು ಪದ್ಯಗಳ ಚಿಕ್ಕ ಕಾವ್ಯ. ನೂರು ಪದ್ಯಗಳ ಗುಚ್ಚಕ್ಕೆ ಶತಕವೆಂದು ಕರೆದಿದ್ದರೂ ನೂರೇ ಎಂಬ ನಿರ್ದಿಷ್ಟತೆ ಇದ್ದಂತಿಲ್ಲ. ೧೦೦...
ಕವಿ ಚಾಮರಸನದು ವ್ಯಕ್ತಿತ್ವ ನಿರಸನ ಸ್ವಭಾವ. “ಪ್ರಭುಲಿಂಗಲೀಲೆ” ಕಾವ್ಯವೂ ವ್ಯಕ್ತಿತ್ವ ನಿರಸನವನ್ನೇ ಹೇಳುವಂಥದ್ದು. ಹೀಗಾಗಿ ಚಾಮರಸ ತನ್ನ ಬದುಕಿನ ಬಗ್ಗೆಯಾಗಲಿ ತನ್ನ ಕಾವ್ಯದ ಬಗ್ಗೆಯಾಗಲಿ ಎಲ್ಲಿಯೂ ಹೇಳಿಕೊಂಡಿಲ್ಲ. “ಪ್ರಭುಲಿಂಗಲೀಲೆ” ಕಾವ್ಯದಲ್ಲಿ ಎಲ್ಲಿಯೂ ಚಾಮರಸ ಎಂಬ ಹೆಸರಿನ ಉಲ್ಲೇಖವೇ ಇಲ್ಲ. ಆದರೆ ಬಾಹ್ಯ ಆಧಾರಗಳಿಂದ ಅಂದರೆ ನಂತರದ ಕವಿಗಳು...
13ನೇ ಶತಮಾನದಲ್ಲಿ ಕಾವ್ಯ ಮಾಧ್ಯಮದ ಯುವರಾಣಿಯಾಗಿ ವಿಜೃಂಭಿಸಿದ ಷಟ್ಪದಿಯು, ಜನಪದ ಸಾಹಿತ್ಯದಲ್ಲಿ ತ್ರಿಪದಿಗೆ ದೊರೆತ ಸ್ಥಾನವನ್ನು ನಡುಗನ್ನಡದಲ್ಲಿ ಪಡೆಯಿತು. ಷಟ್ಪದಿಯ ಮೊದಲ ಕುರುಹು ದೊರೆಯುವುದು ನಾಗವರ್ಮನ ಛಂದೋಬುಧಿಯಲ್ಲಿ. ಅಂಶಗಣಾನ್ವಿತವಾಗಿದ್ದ ಷಟ್ಪದಿಯ ಲಕ್ಷಣವನ್ನು ಅಲ್ಲಿ ಹೀಗೆ ಹೇಳಲಾಗಿದೆ : ಮಂದರ ಧರಗಣ೦ಬಂದಿರ್ಕಾರಂತ್ಯದೊಳ್ಕುಂದದೆ ನೆಲಸುಗೆ ಮದನಹರಂಇಂದುನಿಭಾನನೆಮುಂದಣ ಪದವೀಯಂದಮೆಯಾಗಕಲ್ಕೆ ಷಟ್ಪದಿಕೇಳ್ ಇದರ...
ರಗಳೆ ಕನ್ನಡದ ವಿಶೇಷವಾದ ಪದ್ಯಜಾತಿ. ಪ್ರಸಿದ್ಧವಾದ ದೇಶೀಯ ಛಂದಸ್ಸು. ಇದನ್ನು ರಘಟಾ, ರಗಡಾ, ಪದ್ದಳಿ ಮುಂತಾದ ಹೆಸರಿನಿಂದ ಕರೆಯಲಾಗಿದೆ. ಈ ಪದ್ಯಜಾತಿಯಲ್ಲಿ ಲಲಿತರಗಳೆ, ಉತ್ಸಾಹರಗಳೆ, ಮಂದಾನಿಲರಗಳೆ ಎಂಬ ಮೂರು ಪ್ರಭೇದಗಳಿವೆ. ಹಳಗನ್ನಡ ಕಾವ್ಯಗಳಲ್ಲಿ ಒಂದನೇ ನಾಗವರ್ಮನ “ಛಂದೋಂಬುಧಿ’ಯಲ್ಲಿ ಮೊದಲ ಬಾರಿಗೆ ಇದರ ಪ್ರಸ್ತಾಪ ಬಂದಿದೆ. ಜಯಕೀರ್ತಿಯು ತನ್ನ “ಛ೦ದೋನುಶಾಸನ’ದಲ್ಲಿ ಇದನ್ನು...
“ಚಂಪೂ’ ಇದೊಂದು ಬರೆಯುವ ಶೈಲಿಗೆ ಸಂಬಂಧಿಸಿದ ಪರಿಭಾಷೆ. ಭಾರತೀಯ ಭಾಷೆಗಳಲ್ಲಿ ಪ್ರಾಚೀನವಾದ, ಪ್ರಸಿದ್ಧವಾದ ಹಾಗೂ ವಿಶಿಷ್ಟವಾದ ಒಂದು ಕಾವ್ಯ ಪ್ರಕಾರ. ಕನ್ನಡದ ಆರಂಭದ ಬಹುತೇಕ ಕವಿಗಳು ಇದನ್ನು ಯಶಸ್ವಿಯಾಗಿ ಬಳಸಿದ್ದಾರೆ. ಚಂಪೂ ಪ್ರಧಾನವಾಗಿ ಪದ್ಯ-ಗದ್ಯಗಳಿ೦ದ ಕೂಡಿರುತ್ತದೆ. “ಚಂಪೂ’ ಎನ್ನುವುದಕ್ಕೆ ಸುಂದರವಾದದ್ದು, ಮನೋಹರವಾದದ್ದು ಎ೦ಬ ಅರ್ಥವಿದೆ. ಕನ್ನಡದಲ್ಲಿ ಚಂಪೂ...
ಕನ್ನಡ ಸಾಹಿತ್ಯದ ಶಿರೋರತ್ನಗಳಲ್ಲಿ ಒಬ್ಬನಾದ ಮಹಾಕವಿ ಹರಿಹರ ಅದರ ದಿಕ್ಕುದೆಸೆಗಳನ್ನು ಬದಲಿಸಿದ ಕ್ರಾಂತಿಕವಿ. ಸಾವವರ ಮೇಲೆ ಮನುಜರ ಮೇಲೆ, ಕನಿಷ್ಠರ ಮೇಲೆ ಕಾವ್ಯರಚನೆ ಮಾಡದೆ. ಶಿವಶರಣರನ್ನು ಕುರಿತು ರಗಳೆ ಛಂದಸ್ಸಿನಲ್ಲಿ ಕಾವ್ಯ ರಚಿಸಿ ಅದನ್ನು ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಂಡ ಸಮರ್ಥಕವಿ. ಈತನ ಕಾಲ ಬಹುಮಟ್ಟಗೆ 13ನೇ ಶತಮಾನದ...